“ಇಂದಿರಾ ಆಹಾರ ಕಿಟ್” ಯೋಜನೆಯ ಅಡಿಯಲ್ಲಿ ಸರ್ಕಾರವು ಪಡಿತರ ಚೀಟಿಯನ್ನು ಹೊಂದಿರುವ(Ration card food kit) ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಕ್ಕಿ ಹಾಗೂ ಇನ್ನಿತರ ದಾನ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದ ಪ್ರಸ್ತುತ ಮುಂದಿನ ದಿನಗಳಲ್ಲಿ ಅಕ್ಕಿ ಬದಲು ಆಹಾರ ಕಿಟ್ ವಿತರಣೆ ಮಾಡಲು ಸರ್ಕಾರವು ಚಿಂತನೆಯನ್ನು ನಡೆಸಿದೆ.
ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಆಹಾರ ಭದ್ರತೆಯನ್ನು(BPL card food benefits)ಒದಗಿಸುವ ಒಂದು ಪ್ರಮುಖ ದಾಖಲೆಯಾಗಿದೆ. ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ದಾರರಿಗೆ ಸಾಮಾನ್ಯವಾಗಿ ಅಕ್ಕಿಯನ್ನು ವಿತರಿಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಆಹಾರ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಈ ಯೋಜನೆಯು ರೇಷನ್ ಕಾರ್ಡ್ದಾರರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಮೂಲಕ ಅವರ ಪೌಷ್ಟಿಕತೆಯನ್ನು ಸುಧಾರಿಸುವ ಗುರಿಯನ್ನು ಸಹ ಹೊಂದಿದೆ.
ಇದನ್ನೂ ಓದಿ: Navodaya Online Application-ನವೋದಯ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ!
ಜನರು ಅಕ್ಕಿಯ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಹಾಗೂ ಪೌಷ್ಟಿಕಾಂಶಯುತ ಆಹಾರವನ್ನು ಜನತೆಗೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಒಂದು ಪ್ರಾಯೋಗಿಕ ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಪರೀಶಿಲನೆಯನ್ನು ನಡೆಸುತ್ತಿದೆ, ಯಾರೆಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಈ ಆಹಾರ್ ಕಿಟ್ ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಪಡೆದುಕೊಳ್ಳಬಹುದು? ಇನ್ನಿತರ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
What is food kit-ಏನಿದು ಆಹಾರ ಕಿಟ್? ಈ ಕಿಟ್ ನಲ್ಲಿ ಏನೆಲ್ಲಾ ಇರುತ್ತದೆ?
ಸರ್ಕಾರವು ವಿತರಿಸುವ ಆಹಾರ ಕಿಟ್ಗಳಲ್ಲಿ ಕೇವಲ ಅಕ್ಕಿಯಷ್ಟೇ ನೀಡಲಾಗುತ್ತಿತ್ತು. ಹೊಸ ಯೋಜನೆಯ ಅಡಿಯಲ್ಲಿ ಸರ್ಕಾರ ಆಹಾರ ಕಿಟ್ ರೂಪದಲ್ಲಿ ಪೂರಕ ಆಹಾರ ಪದಾರ್ಥಗಳನ್ನು ನೀಡಲು ಜುಲೈ 02 ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತೊದೆ.ಯಾವೆಲ್ಲ ಆಹಾರ ಪದಾರ್ಥಗಳು ಎಂದು ಈ ಕೆಳಗೆ ತಿಳಿಸಿದೆ.
ಇದನ್ನೂ ಓದಿ: Ganga Kalyana-ಜಲಶಕ್ತಿ ಯೋಜನೆಯಡಿ ಬೋರ್ವೆಲ್ ಕೊರೆಸಲು ₹2.75 ಲಕ್ಷ ಸಹಾಯಧನಕ್ಕೆ ಅರ್ಜಿ!
- ಸಕ್ಕರೆ
- ಉಪ್ಪು
- ತೂಗರಿ ಬೇಳೆ
- ಕಾಫಿ ಪುಡಿ
- ಟೀ ಪುಡಿ
- ಅಡುಗೆ ಎಣ್ಣೆ
- ರಾಗಿ ಮತ್ತು ಗೋಧಿ
ಇದನ್ನೂ ಓದಿ: Health Insurance-ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ ₹5 ಲಕ್ಷ ಉಚಿತ ಚಿಕಿತ್ಸಾ ಸೌಲಭ್ಯ!
ಈ ಕಿಟ್ಗಳನ್ನು ಕುಟುಂಬದ ಗಾತ್ರಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತಿದ್ದು, ಒಂದು ತಿಂಗಳಿಗೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿರುತ್ತದೆ.
ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಆಹಾರದ ಕಿಟ್:
ಪ್ರಸ್ತುತ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು ಇದರ ಬದಲಾಗಿ ಆಹಾರದ ಕಿಟ್ ಅನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: Cow Mat Subsidy-ಪಶುಪಾಲನೆ ಇಲಾಖೆಯಿಂದ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್!
Who can get a food kit-ಈ ಯೋಜನೆಯಲ್ಲಿ ಯಾರೆಲ್ಲ ಆಹಾರ ಕಿಟ್ ಪಡೆದುಕೊಳ್ಳಬಹುದು?
ಈ ಯೋಜನೆಯ ಅಡಿಯಲ್ಲಿ ಪ್ರಾಥಮಿಕ ಬಡತನ ರೇಖೆಯಡಿ (BPL) ಇರುವ ರೇಷನ್ ಕಾರ್ಡ್ದಾರರು ಆಗಿರುತ್ತಾರೆ. ಯೋಜನೆ ಶ್ರೇಣೀಬದ್ಧವಾಗಿ ಜಾರಿಯಾಗಲಿದ್ದು, ಪ್ರಾರಂಭದಲ್ಲಿ ಕೆಲವೊಂದು ಜಿಲ್ಲೆಗಳಲ್ಲಿಯೇ ಈ ಕಿಟ್ ವಿತರಣೆ ಪ್ರಾರಂಭವಾಗಲಿದೆ.
Purpose Of This SCheme-ಆಹಾರ ಕಿಟ್ ವಿತರಣೆಯ ಉದ್ದೇಶ ಏನು?
1) ಅಕ್ಕಿಯ ಜೊತೆಗೆ ಇತರ ಆಹಾರ ಪದಾರ್ಥಗಳನ್ನು ನೀಡುವುದರಿಂದ ಜನರಿಗೆ ಸಮತೋಲನ ಆಹಾರವನ್ನು ನೀಡುವ ಉದ್ದೇಶ.
2) ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಗತ್ಯವಾದ ಆಹಾರ ಸಾಮಾಗ್ರಿಗಳನ್ನು ಕಡಿಮೆ ದರದಲ್ಲಿ ನೀಡುವ ಉದ್ದೇಶ.
ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
3) ಬಡ ಕುಟುಂಬಗಳಿಗೆ ಸಮತೋಲನವಾದ ಪೌಷ್ಟಿಕ ಆಹಾರವನ್ನು ಒದಗಿಸುವುದು.
4) ಆಹಾರ ಭದ್ರತೆ ಮತ್ತು ಆಹಾರ ವೈವಿಧ್ಯತೆಯನ್ನು ಉತ್ತೇಜಿಸುವುದರ ಸಲುವಾಗಿ.
5) ಅಕ್ಕಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಪೌಷ್ಟಿಕ ಆಹಾರವನ್ನು ನೀಡುವ ಉದ್ದೇಶವಾಗಿ.
ಇದನ್ನೂ ಓದಿ: Education Loan-ಶೇ. 2ರ ಬಡ್ಡಿದರಲ್ಲಿ 1.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!
Uses Of This Scheme-ಈ ಯೋಜನೆಯ ಪ್ರಯೋಜನಗಳಾವುವು?
ಆಹಾರ ಕಿಟ್ನಲ್ಲಿ ಒಳ್ಳೆಯ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತದೆ.
ಒಂದೇ ಕಿಟ್ನಲ್ಲಿ ಎಲ್ಲಾ ಅಗತ್ಯ ಪದಾರ್ಥಗಳು ದೊರೆಯುವುದರಿಂದ ಖರೀದಿಯ ತೊಂದರೆ ಕಡಿಮೆಯಾಗುತ್ತದೆ.
ಕಡಿಮೆ ಬೆಲೆಯಲ್ಲಿ ಆಹಾರ ಸಾಮಗ್ರಿಗಳು ಲಭ್ಯವಾಗುವುದರಿಂದ ಕುಟುಂಬಗಳಿಗೆ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ.
ಈ ಯೋಜನೆಯು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಒದಗಿಸಲ್ಪಡುವುದರಿಂದ ಜನರಿಗೆ ಸಹಾಯವಾಗುತ್ತದೆ.