Monday, June 2, 2025
No menu items!
HomeAgricultureHorticulture Department- ತೋಟಗಾರಿಕೆ ಇಲಾಖೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Horticulture Department- ತೋಟಗಾರಿಕೆ ಇಲಾಖೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ತೋಟಗಾರಿಕೆ ಇಲಾಖೆಯ ಅಡಿಯಲ್ಲಿ 2025-2026 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (Drip Irrigation Subsidy) ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM)ಯಡಿ ಮಿನಿ ಟ್ರ್ಯಾಕ್ಟರ್(Mini Tractor) ಸೇರಿದಂತೆ ಹಲವು ಕೃಷಿ ಘಟಕಗಳಿಗೆ ಸಬ್ಸಿಡಿ ಪಡೆಯಲು ಅರ್ಜಿಯನ್ನು ಕರೆಯಲಾಗಿದೆ.

ರಾಜ್ಯ ಸರ್ಕಾರ ಕೃಷಿಕರ ಹಿತವನ್ನು ಮುಂದಿಟ್ಟುಕೊಂಡು, ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಉತ್ತೇಜಿಸಲು ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಘಟಕಗಳಿಗೆ ಸಬ್ಸಿಡಿಯೊಂದಿಗೆ ನೆರವು ನೀಡಲು ಮುಂದಾಗಿದೆ. ಈ ಯೋಜನೆಯ ಮೂಲಕ ಕೃಷಿಯ ಉತ್ಪಾದಕತೆ ಹೆಚ್ಚಿಸಿ, ಕೃಷಿಕರ ಶ್ರಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: BPL Card Benefits- BPL Card ಕುಟುಂಬಗಳಿಗೆ ಈ ಸೇವೆ ಉಚಿತವಾಗಿ ಲಭ್ಯ!

ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಕೊಯ್ಲು ಯಂತ್ರ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Who Can Apply – ಅರ್ಜಿಯನ್ನು ಯಾರು ಸಲ್ಲಿಸಲು ಅರ್ಹರು?

1) ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2) ಅಭ್ಯರ್ಥಿಯು ತಮ್ಮ ಹೆಸರಿನಲ್ಲಿ ಸ್ವಂತ ಭೂಮಿಯನ್ನು ಹೊಂದಿರಬೇಕು.

3) ರೈತರು ಕಡ್ದಾಯವಾಗಿ ಭೂಮಿಯ ದಾಖಲೆಯನ್ನು ಹೊಂದಿರಬೇಕು.

4) ಸಣ್ಣ ಮತ್ತು ಅತೀ ಸಣ್ಣ ರೈತರ ಗುಂಪಿಗೆ ಸೇರಿರಬೇಕು.

5) ರೈತರು ಜಮೀನಿನಲ್ಲಿ ನೀರಾವರಿ ಸೌಲಭ್ಯವನ್ನು ಹೊಂದಿರಬೇಕು.

6) ಸ್ಥಳೀಯ/ಸಕ್ರೀಯ ರೈತರು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Karnataka Weather-ರಾಜ್ಯದ ಮಳೆ ಮುನ್ಸೂಚನೆ ಮತ್ತು ಮುಂಗಾರು ಮಳೆ ಮಾಹಿತಿ!

mini tractor subsidy

ಅರ್ಜಿಯನ್ನು ಸಲ್ಲಿಸಲು ಯಾವ ಯಾವ ಜಿಲ್ಲೆಗಳಲ್ಲಿ ಅವಕಾಶವಿದೆ?

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಈ ಎರಡು ಯೋಜನೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದು, ಅನುದಾನದ ಲಭ್ಯತೆಯ ಆಧಾರದ ಮೇಲೆ ಅರ್ಜಿಗಳನ್ನು ಕರೆಯಲಾಗಿದ್ದು, ಪ್ರಸ್ತುತ ಉತ್ತರ ಕನ್ನಡ ಮತ್ತು ಹುಬ್ಬಳ್ಳಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

ಯಾವ ಯಾವ ವರ್ಗದ ರೈತರಿಗೆ ಎಷ್ಟು ಮೀಸಲಾತಿ ಸೌಲಭ್ಯವಿರುತ್ತದೆ್?

ಪರಿಶಿಷ್ಟ ಜಾತಿ-17%, ಪರಿಶಿಷ್ಟ ಪಂಗಡ-7%, ಮಹಿಳೆ-33%, ಅಲ್ಪಸಂಖ್ಯಾತರು-5 % ಹಾಗೂ ಅಂಗವಿಕಲರಿಗೆ ಶೇ.3% ರಂತೆ ಮೀಸಲಾತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Free Aadhaar Update- ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್ ಕುರಿತು ಮಹತ್ವದ ಪ್ರಕಟಣೆ!

Subsidy Amount – ಸಬ್ಸಿಡಿಯ ವಿವರ ಇಂತಿದೆ?

ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಈ ಎರಡು ಯೋಜನೆಯ ಅಡಿಯಲ್ಲಿ ಶೇ 50% ರಿಂದ ಶೇ 90% ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.

How to apply- ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?

ಅರ್ಹ ರೈತರು ತಮ್ಮ ತಾಲೂಕಿನಲ್ಲಿರುವ ತೋಟಗಾರಿಕೆ ಇಲಾಖೆಯ ತೋಟಗಾರಿಕಾ ನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆಯನ್ನು ತೆಗೆದುಕೊಂಡು, ಅಗತ್ಯ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Pension Scheme- ತಿಂಗಳಿಗೆ ರೂ 5,000/- ಪಿಂಚಣಿ ಪಡೆಯಲು ಅವಕಾಶ!

Documents- ಅಗತ್ಯ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ್/Aadhar card

ರೇಷನ್ ಕಾರ್ಡ್/Ration card

ಜಮೀನಿನ ಪಹಣಿ/RTC

ಬ್ಯಾಂಕ್ ಪಾಸ್‌ಬುಕ್/Bank passbook

ಫೋಟೋ/Photocopy

ನೀರಾವರಿ ಮೂಲದ ಪ್ರಮಾಣ ಪತ್ರ

ಬೆಳೆ ದೃಢೀಕರಣ ಪತ್ರ/Crop certificate

ಇದನ್ನೂ ಓದಿ: Tarpaulin Subsidy- ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

More Information- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಅಧಿಕೃತ ತೋಟಗಾರಿಕೆ ಇಲಾಖೆ- Click here
Helpline-1902

RELATED ARTICLES
- Advertisment -

Most Popular

Recent Comments