ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಭಾರತ ಸರ್ಕಾರವು ಜಂಟಿಯಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು(Fasal Bima Yojana) ಜಾರಿಗೆ ತಂದಿದ್ದು, ರೈತರ ವಿವಿಧ ಬೆಳೆಗಳಿಗೆ ಬೆಳೆ ವಿಮೆಯ ಪಾವತಿಗೆ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು(Pradhan Mantri Fasal Bima) ಒಂದು ಪ್ರಮುಖ ಬೆಳೆ ವಿಮಾ ಯೋಜನೆಯಾಗಿದ್ದು, ನೈಸರ್ಗಿಕ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದಾಗಿ ಬೆಳೆ ವೈಫಲ್ಯದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಮೂಲಕ ರೈತರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Free Computer Training-ಕೆನರಾ ಬ್ಯಾಂಕ್ನಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ!
ಈ ಯೋಜನೆಯು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದಲ್ಲದೆ ರೈತರ ಆದಾಯವನ್ನು ಸ್ಥಿರಗೊಳಿಸುತ್ತದೆ. ಹಾಗೂ ರೈತರು ಕೃಷಿಯಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ. ರೈತರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿಯನ್ನು ಸಲ್ಲಿಸಿ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಿದೆ.
ಪ್ರಸ್ತುತ ಈ ಲೇಖನದಲ್ಲಿ ಈ ಯೋಜನೆಯಡಿಯಲ್ಲಿ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸುವ ಹಂತಗಳು? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: BMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!
Benefits of PMFBY scheme- PMFBY ಯೋಜನೆಯ ಪ್ರಯೋಜನಗಳು:
“ನೈಸರ್ಗಿಕ ವಿಕೋಪಗಳು, ಕೀಟಭಾಧೆ ಹಾಗೂ ರೋಗಗಳಿಂದ ಬಿತ್ತನೆಗೂ ಮೊದಲು ನಿಂದ ಹಿಡಿದು ಕೊಯ್ಲಿನ ನಂತರದ ಹಂತವರೆಗೆ ಉಂಟಾಗುವ ನಷ್ಟಗಳ ವ್ಯಾಪ್ತಿ.”
- ಪ್ರೀಮಿಯಂ ದರಗಳನ್ನು ಸಬ್ಸಿಡಿ ಮಾಡಲಾಗುತ್ತದೆ ಮತ್ತು ಕಡಿಮೆ ಇಡಲಾಗುತ್ತದೆ:
- ಖಾರಿಫ್ ಬೆಳೆಗಳಿಗೆ (ಉದಾ. ಭತ್ತ, ಜೋಳ) ವಿಮಾ ಮೊತ್ತದ 2%.
- ರಬಿ ಬೆಳೆಗಳಿಗೆ (ಉದಾ. ಗೋಧಿ, ಬಾರ್ಲಿ) ವಿಮಾ ಮೊತ್ತದ 1.5%.
- ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ 5%.
- ಉಳಿದ ಪ್ರೀಮಿಯಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.
- ತಡೆಗಟ್ಟಲಾದ ಬಿತ್ತನೆ ಮತ್ತು ಸ್ಥಳೀಯ ವಿಪತ್ತುಗಳ (ಉದಾ. ಅಲಿಕಲ್ಲು ಮಳೆ, ಭೂಕುಸಿತ, ಪ್ರವಾಹ) ವ್ಯಾಪ್ತಿ.
- ಬೆಳೆ ನಷ್ಟವನ್ನು ತ್ವರಿತವಾಗಿ ಮತ್ತು ನಿಖರವಾಗಿ ಅಂದಾಜಿಸಲು ರಿಮೋಟ್ ಸೆನ್ಸಿಂಗ್, ಸ್ಮಾರ್ಟ್ ಫೋನ್ಗಳು ಮತ್ತು ಡೋನ್ಗಳ ಬಳಕೆ.
- ರೈತರ ಬ್ಯಾಂಕ್ ಖಾತೆಗಳಿಗೆ ಕ್ರೈಮ್ ಮೊತ್ತದ ನೇರ ಲಾಭ ವರ್ಗಾವಣೆ (OBT)
ಇದನ್ನೂ ಓದಿ: Vokkaliga Nigama-ಒಕ್ಕಳಿಗ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಸೇರಿ ಒಟ್ಟು 7 ಯೋಜನೆಗೆ ಅರ್ಜಿ ಆಹ್ವಾನ!
Last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಈ ಯೋಜನೆಯಡಿಯಲ್ಲಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025
Documents required- ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು?
- ರೈತರ ಆಧಾರ್ ಕಾರ್ಡ್/Aadhar card
- ಭೂಮಿಯ ದಾಖಲೆಗಳು (ಖಾತಾ/ಖಾತಾ ಸಂಖ್ಯೆ)/Land Documents
- ಅಭ್ಯರ್ಥಿಯ ಬ್ಯಾಂಕ್ ಪುಸ್ತಕ/Bank passbook
- ಬೆಳೆ ವಿವರಗಳು/Crop details
- ಪಾಸ್ಪೋರ್ಟ್ ಫೋಟೋ/Photocopy
ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!
Who can apply-ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?
ಅಧಿಸೂಚಿತ ಪ್ರದೇಶದಲ್ಲಿ ಅಧಿಸೂಚಿತ ಬೆಳೆಗೆ ಮಂಜೂರಾದ/ನವೀಕರಿಸಿದ ಬೆಳೆ ಸಾಲ ಖಾತೆ/ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಹೊಂದಿರುವ ರೈತರು.
ರೈತರು ಬಿತ್ತಿದ ಬೆಳೆಯ ಮೇಲೆ ವಿಮಾ ಆಸಕ್ತಿಯನ್ನು ಹೊಂದಿರಬೇಕು.
ರೈತರು ಐಡಿ (FID) ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು.
ಕ್ರೈಮ್ ವರ್ಗಾವಣೆಗಾಗಿ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಸಾಲ ಪಡೆದವರು ಮತ್ತು ಸಾಲ ಪಡೆಯದ ರೈತರು ಅಂದರೆ ಕೃಷಿ ಸಾಲ ಹೊಂದಿರುವವರು ಮತ್ತು ಪಡೆಯದವರು ಇಬ್ಬರೂ ಸಹ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Ganga Kalyana-ಜಲಶಕ್ತಿ ಯೋಜನೆಯಡಿ ಬೋರ್ವೆಲ್ ಕೊರೆಸಲು ₹2.75 ಲಕ್ಷ ಸಹಾಯಧನಕ್ಕೆ ಅರ್ಜಿ!
How to apply for this scheme- ಅರ್ಜಿಯನ್ನು ಹೇಗೆ ಸಲ್ಲಿಸುವುದು ?
ಅರ್ಹ ಅಭ್ಯರ್ಥಿಗಳು ನಿಮ್ಮ ಊರಿನ ಹತ್ತಿರದಲ್ಲಿರುವ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಕೃಷಿ ಸಾಲ ಪಡೆದ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Navodaya Online Application-ನವೋದಯ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ!

ರೈತರು ಈ ಲಿಂಕ್ ಮೇಲೆ ಕ್ಲಿಕ್ PMFBY ಮಾಡಿ ಅಧಿಕೃತ ವೆಬ್ಸೈಟ್ ಪೋರ್ಟಲ್ ಮೂಲಕ ಅಥವಾ ಬೆಳೆ ವಿಮಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Health Insurance-ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ ₹5 ಲಕ್ಷ ಉಚಿತ ಚಿಕಿತ್ಸಾ ಸೌಲಭ್ಯ!
ರೈತರು ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click Here