ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ(Pradhan Mantri Fasal Bima yojana)ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿರುತ್ತದೆ. ಈ ಲೇಖನದಲ್ಲಿ ಈ ಯೋಜನೆಯ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಈ ಯೋಜನೆಯನ್ನು ಸರ್ಕಾರವು ಜಂಟಿಯಾಗಿ ಜಾರಿಗೆ ತಂದಿದ್ದು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಒಂದು ಪ್ರಮುಖ ಬೆಳೆ ವಿಮಾ ಯೋಜನೆಯಾಗಿದ್ದು, ಕೃಷಿಕರ ಬೆಳೆಗಳಿಗೆ ಸುರಕ್ಷತೆ ನೀಡುವ ಉದ್ದೇಶವಾಗಿದೆ.
ಅರ್ಹ ಅಭ್ಯರ್ಥಿಗಳು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ಯೋಜನೆಯನ್ನು ಜಾರಿಗೆ ತಂದಿರು ಉದ್ದೇಶವೇನು? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Horticulture Department- ತೋಟಗಾರಿಕೆ ಇಲಾಖೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Purpose of this scheme- ಈ ಯೋಜನೆ ಜಾರಿಗೆ ತರಲು ಸರ್ಕಾರದ ಉದ್ದೇಶವೇನು?
ಅನಿರೀಕ್ಷಿತ ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಆರ್ಥಿಕ ಸಹಾಯವನ್ನು ನೀಡುವುದು.
ಕೃಷಿಕರ ಆದಾಯವನ್ನು ಸ್ಥಿರಗೊಳಿಸುತ್ತದೆ.
ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿ ಕೊಳ್ಳಲು ಪ್ರೋತ್ಸಾಹಿಸುವುದು.
ಬೆಳೆ ವೈವಿಧ್ಯತೆ ಮತ್ತು ಕೃಷಿ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ರೈತರು ಕೃಷಿಯಲ್ಲಿ ಅವರ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಕಾಯ್ದುಕೊಳ್ಳುವುದು.
ಇದನ್ನೂ ಓದಿ: BPL Card Benefits- BPL Card ಕುಟುಂಬಗಳಿಗೆ ಈ ಸೇವೆ ಉಚಿತವಾಗಿ ಲಭ್ಯ!
Benefits of PMFBY scheme- PMFBY ಯೋಜನೆಯ ಪ್ರಯೋಜನಗಳು:
“ನೈಸರ್ಗಿಕ ವಿಕೋಪಗಳು, ಕೀಟಭಾಧೆ ಹಾಗೂ ರೋಗಗಳಿಂದ ಬಿತ್ತನೆಗೂ ಮೊದಲು ನಿಂದ ಹಿಡಿದು ಕೊಯ್ಲಿನ ನಂತರದ ಹಂತವರೆಗೆ ಉಂಟಾಗುವ ನಷ್ಟಗಳ ವ್ಯಾಪ್ತಿ.”
A) ಪ್ರೀಮಿಯಂ ದರಗಳನ್ನು ಸಬ್ಸಿಡಿ ಮಾಡಲಾಗುತ್ತದೆ ಮತ್ತು ಕಡಿಮೆ ಇಡಲಾಗುತ್ತದೆ:
B) ಖಾರಿಫ್ ಬೆಳೆಗಳಿಗೆ (ಉದಾ. ಭತ್ತ, ಜೋಳ) ವಿಮಾ ಮೊತ್ತದ 2%.
C) ರಬಿ ಬೆಳೆಗಳಿಗೆ (ಉದಾ. ಗೋಧಿ, ಬಾರ್ಲಿ) ವಿಮಾ ಮೊತ್ತದ 1.5%.
D) ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ 5%.
E) ಉಳಿದ ಪ್ರೀಮಿಯಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.
F) ತಡೆಗಟ್ಟಲಾದ ಬಿತ್ತನೆ ಮತ್ತು ಸ್ಥಳೀಯ ವಿಪತ್ತುಗಳ (ಉದಾ. ಅಲಿಕಲ್ಲು ಮಳೆ, ಭೂಕುಸಿತ, ಪ್ರವಾಹ) ವ್ಯಾಪ್ತಿ.
G) ಬೆಳೆ ನಷ್ಟವನ್ನು ತ್ವರಿತವಾಗಿ ಮತ್ತು ನಿಖರವಾಗಿ ಅಂದಾಜಿಸಲು ರಿಮೋಟ್ ಸೆನ್ಸಿಂಗ್, ಸ್ಮಾರ್ಟ್ ಫೋನ್ಗಳು ಮತ್ತು ಡೋನ್ಗಳ ಬಳಕೆ.
H) ರೈತರ ಬ್ಯಾಂಕ್ ಖಾತೆಗಳಿಗೆ ಕ್ರೈಮ್ ಮೊತ್ತದ ನೇರ ಲಾಭ ವರ್ಗಾವಣೆ (OBT)
ಇದನ್ನೂ ಓದಿ: Free Aadhaar Update- ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್ ಕುರಿತು ಮಹತ್ವದ ಪ್ರಕಟಣೆ!

ಇದನ್ನೂ ಓದಿ: Karnataka Weather-ರಾಜ್ಯದ ಮಳೆ ಮುನ್ಸೂಚನೆ ಮತ್ತು ಮುಂಗಾರು ಮಳೆ ಮಾಹಿತಿ!
Who can apply-ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
1) ಅಧಿಸೂಚಿತ ಪ್ರದೇಶದಲ್ಲಿ ಅಧಿಸೂಚಿತ ಬೆಳೆಗೆ ಮಂಜೂರಾದ/ನವೀಕರಿಸಿದ ಬೆಳೆ ಸಾಲ ಖಾತೆ/ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಹೊಂದಿರುವ ರೈತರು.
2) ರೈತರು ಬಿತ್ತಿದ ಬೆಳೆಯ ಮೇಲೆ ವಿಮಾ ಆಸಕ್ತಿಯನ್ನು ಹೊಂದಿರಬೇಕು.
3) ಮಾನ್ಯ ರೈತ ಐಡಿ (FID) ಮತ್ತು ಅಧಾರ್ ಸಂಖ್ಯೆಯನ್ನು ಹೊಂದಿರಬೇಕು.
4) ಕ್ರೈಮ್ ವರ್ಗಾವಣೆಗಾಗಿ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
5) ಸಾಲ ಪಡೆದವರು ಮತ್ತು ಸಾಲ ಪಡೆಯದ ರೈತರು ಅಂದರೆ ಕೃಷಿ ಸಾಲ ಹೊಂದಿರುವವರು ಮತ್ತು ಪಡೆಯದವರು ಇಬ್ಬರೂ ಸಹ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Pension Scheme- ತಿಂಗಳಿಗೆ ರೂ 5,000/- ಪಿಂಚಣಿ ಪಡೆಯಲು ಅವಕಾಶ!
How to apply- ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ನಿಮ್ಮ ಊರಿನ ಹತ್ತಿರದಲ್ಲಿರುವ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಕೃಷಿ ಸಾಲ ಪಡೆದ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ರೈತರು PMFBY ಪೋರ್ಟಲ್ https://pmfby.gov.in ಮೂಲಕ ಅಥವಾ ಬೆಳೆ ವಿಮಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು
ಇದನ್ನೂ ಓದಿ: Tarpaulin Subsidy- ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!
Documents required- ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು?
ರೈತರ ಆಧಾರ್ ಕಾರ್ಡ್/Aadhar card
ಭೂಮಿಯ ದಾಖಲೆಗಳು (ಖಾತಾ/ಖಾತಾ ಸಂಖ್ಯೆ)/Land Documents
ಅಭ್ಯರ್ಥಿಯ ಬ್ಯಾಂಕ್ ಪುಸ್ತಕ/Bank passbook
ಬೆಳೆ ವಿವರಗಳು/Crop details
ಪಾಸ್ಪೋರ್ಟ್ ಫೋಟೋ/Photocopy
ರೈತರು ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click Here