ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಹೆಜ್ಜೆಯಾದ “ಭಾಗ್ಯಲಕ್ಷ್ಮಿ” ಯೋಜನೆಯನ್ನು(bhagya lakshmi yojane) 2006 ರಲ್ಲಿ ಜಾರಿಗೆ ಬಂದಿದ್ದು ರಾಜ್ಯ ಸರಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1.50 ಲಕ್ಷ ಸಹಾಯಧನವನ್ನು ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರಿ ಯೋಜನೆಯ ಅಡಿಯಲ್ಲಿ ಮಹಿಳಾ ಮಕ್ಕಳ ಭವಿಷ್ಯಕ್ಕೆ(Girl child scheme)ಬೆಂಬಲ ನೀಡುವ ಉದ್ದೇಶದಿಂದ ವಿಶೇಷ ಆರ್ಥಿಕ ನೆರವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ, ಆರ್ಥಿಕ ಭದ್ರತೆಗಾಗಿ ಹಣಕಾಸಿನ ನೆರವು, ವಿದ್ಯಾರ್ಥಿ ವೇತನಗಳು, ಆರೋಗ್ಯ ವಿಮೆ ಮೊದಲಾದ ಪ್ರಯೋಜನವನ್ನು ನೀಡುತ್ತಿದೆ.
ಇದನ್ನೂ ಓದಿ: Fasal Bhima Yojane-ಬೆಳೆ ವಿಮೆ ನೊಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ!
ರಾಜ್ಯ ಸರಕಾರ 2020-21ರಲ್ಲಿ ಈ ಯೋಜನೆಯನ್ನು ಅಂಚೆ ಇಲಾಖೆಯ “ಸುಕನ್ಯಾ ಸಮೃದ್ಧಿ”(sukanya samruddi yojana)ಯೋಜನೆಯೊಂದಿಗೆ ಸಂಯೋಜಿಸಿದ್ದು ಈ ಮೂಲಕ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಸಾಮಾಜಿಕವಾಗಿ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳಿಗೆ ಈ ಯೋಜನೆ ಆಶಾಕಿರಣವಾಗಿ ಪರಿಣಮಿಸುತ್ತಿದೆ. ಇದರಲ್ಲಿ ಸಾಕಷ್ಟು ಪ್ರಯೋಜನಗಳಿದ್ದು ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
Who Can Apply-ಈ ಯೋಜನೆಗೆ ಪ್ರಯೋಜನಕ್ಕೆ ಯಾರೆಲ್ಲ ಅರ್ಹರು?
- ಈ ಯೋಜನೆ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದೆ.
- ಮಗು ಜನನವಾದ ಒಂದು ವರ್ಷದೊಳಗೆ ನೋಂದಾಯಿಸಬೇಕು.
- ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನಗಳು ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಲಭ್ಯವಿರುತ್ತದೆ.
- ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಮಕ್ಕಳು ಲಸಿಕೆಯನ್ನು ಹಾಕಿಸಿರಬೇಕು.
- ಹಣಕಾಸಿನ ನೆರವಿಗೆ ಅರ್ಹರಾಗಲು ಮಗು ಎಂಟನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
- 18 ವರ್ಷ ತುಂಬುವ ಮೊದಲು ವಿವಾಹವಾದರೆ ಯೋಜನೆಯ ಪ್ರಯೋಜನ ದೊರೆಯುವುದಿಲ್ಲ.
ಇದನ್ನೂ ಓದಿ: E-Khata-ಆಸ್ತಿ ಮಾಲಿಕರಿಗೆ ಮಹತ್ವದ ಮಾಹಿತಿ! ಜುಲೈ 1 ರಿಂದ ಇ-ಖಾತಾ ಕಡ್ಡಾಯ
What are the benefits of this project-ಈ ಯೋಜನೆಯ ಪ್ರಯೋಜನಗಳೇನು? :
ಹೆಣ್ಣು ಮಗುವಿನ ಸುಕನ್ಯಾ ಸಮೃದ್ಧಿ ಯೋಜನಾ ಖಾತೆಗೆ ಸರಕಾರ ಆರಂಭಿಕ ಠೇವಣಿಯನ್ನು ಇಡುತ್ತದೆ.
18 ವರ್ಷಗಳು ಪೂರೈಸಿದ ನಂತರ ರೂ. 1.50 ಲಕ್ಷದವರೆಗೆ ಮೆಚ್ಯೂರಿಟಿ ಮೊತ್ತವನ್ನು ನೀಡಲಾಗುತ್ತದೆ.
ಈ ಪ್ರಯೋಜನದೊಂದಿಗೆ ವರ್ಷಕ್ಕೆ ರೂ. 25 ಸಾವಿರದವರೆಗೆ ಆರೋಗ್ಯ ವಿಮೆ ಸೌಲಭ್ಯವೂ ಇದೆ.

How many scholarships are given under this scheme-ಈ ಯೋಜನೆಯ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?
- ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ 300 ರೂಪಾಯಿಗಳು.
- ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ 500 ರೂಪಾಯಿಗಳು.
- ಐದನೇ ತರಗತಿಯ ವಿದ್ಯಾರ್ಥಿಗಳಿಗೆ 600 ರೂಪಾಯಿಗಳು.
- ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ 700 ರೂಪಾಯಿಗಳು.
- ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ 800 ರೂಪಾಯಿಗಳು.
- ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ 1 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿವೇತನ ಲಭಿಸುತ್ತದೆ.
ಇದನ್ನೂ ಓದಿ: Study Loan-ಉನ್ನತ ವಿದ್ಯಾಭ್ಯಾಸಕ್ಕೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!
Death benefit under this scheme:ಈ ಯೋಜನೆಯಡಿ ಮರಣ ಪರಿಹಾರವನ್ನು ಎಷ್ಟು ನೀಡಾಲಾಗುತ್ತದೆ :
ಮಗು ಆಕಸ್ಮಿಕವಾಗಿ ಮರಣ ಹೊಂದಿದರೆ ರೂ. 1 ಲಕ್ಷ, ಇನ್ನಿತರ ಕಾರಣಗಳಿಂದ ಸಾವನ್ನಪ್ಪಿದರೆ ರೂ. 42300, ವಿಮೆ ಮಾಡಿದ ಪೋಷಕರ ಮರಣದ ಸಂದರ್ಭದಲ್ಲಿ ರೂ. 30 ಸಾವಿರ ಆರ್ಥಿಕ ನೆರವು ದೊರೆಯುತ್ತದೆ.
Increased maturity amount-ಹೆಚ್ಚಿಸಿದ ಮೆಚ್ಯುರಿಟಿ ಮೊತ್ತ :
ಬಿಪಿಎಲ್ ಕುಟುಂಬದ ಇಬ್ಬರು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ಸಾವಿರದಂತೆ ಹದಿನೈದು ವರ್ಷಗಳವರೆಗೆ ಒಟ್ಟು ರೂ. 45 ಸಾವಿರ ಮೊತ್ತವನ್ನು ರಾಜ್ಯ ಸರಕಾರ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆಗೆ ಠೇವಣಿ ಇಡುತ್ತದೆ. 21 ವರ್ಷ ಅವಧಿ ಪೂರ್ಣಗೊಂಡ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ. 50ರಷ್ಟು ಭಾಗವನ್ನು ಹಿಂಪಡೆಯಲು ಈ ಯೋಜನೆಯಡಿ ಅವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ: Student Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
Documents-ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :
- ಮಗುವಿನ ಜನನ ಪ್ರಮಾಣಪತ್ರದ/Child’s birth certificate
2) ಪೋಷಕರ ಆದಾಯ ವಿವರಗಳು/Parents’ income details
3) ಹೆಣ್ಣು ಮಗುವಿನ ಪೋಷಕರ ವಿಳಾಸ ಪುರಾವೆ/Address proof of girl child’s parents
4) ಬಿಪಿಎಲ್ ಪಡಿತರ ಚೀಟಿ/BPL ration card
ಇದನ್ನೂ ಓದಿ: Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!
5) ಹೆಣ್ಣು ಮಗುವಿನ ಬ್ಯಾಂಕ್ ಖಾತೆ ವಿವರ/Bank account details of girl child
6) ಪೋಷಕರೊಂದಿಗೆ ಮಗುವಿನ ಛಾಯಾಚಿತ್ರ/Photograph of child with parents
7) ಆರೋಗ್ಯ ತಪಾಸಣಾ ವರದಿ/Health checkup report
How To Apply-ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಮಪಂಚಾಯತ್, ಅಂಗನವಾಡಿ ಕೇಂದ್ರ ಅಥವಾ ಭಾಗ್ಯಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಅಗತ್ಯವಿರುವ ದಾಖಲಾತಿಗಳೊಂದಿಗೆ ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!
For More Information-ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ Click Here