Monday, June 16, 2025
No menu items!
HomefinanceStudy Loan-ಉನ್ನತ ವಿದ್ಯಾಭ್ಯಾಸಕ್ಕೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ...

Study Loan-ಉನ್ನತ ವಿದ್ಯಾಭ್ಯಾಸಕ್ಕೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!

ಸರ್ಕಾರವು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ(Lingayat nigama) ಮತ್ತು ದೇವರಾಜು ಅರಸು ನಿಗಮದ(Devaraj Arasu nigama) ಅಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲವನ್ನು(Education Loan) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು(Study Loan Scheme in Karnataka) ಮುಂದುವರಿಸಲು ರಾಜ್ಯ ಸರ್ಕಾರದ ಅಡಿಯಲ್ಲಿಇಂಜಿನಿಯರಿಂಗ್,ವೈದ್ಯಕೀಯ ಪದವಿ, ಕೃಷಿ, ನರ್ಸಿಂಗ್,ಸೇರಿದಂತೆ ಇನ್ನೂ 28 ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಪಡೆದು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸರ್ಕಾರವು ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: Student Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಪ್ರಸ್ತುತ, ಈ ಯೋಜನೆಯ ಅಡಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು,ಸೇವಾ ಸಿಂಧು ತಂತ್ರಾಂಶದ(Seva sindhu portal) ಮೂಲಕ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸುವ ವಿಧಾನ? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಈ ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ.

Who can Apply- ಅರ್ಜಿಯನ್ನು ಯಾರೆಲ್ಲ ಸಲ್ಲಿಸಬಹುದು:

1) ಅರ್ಜಿದಾರ ವಿದ್ಯಾರ್ಥಿಯು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.
2) ಸ್ನಾತಕ (Graduation) ವ್ಯಾಸಂಗ ಮಾಡುತ್ತಿದ್ದರೆ ಅರ್ಜಿದಾರ ವಿದ್ಯಾರ್ಥಿಯ 18 ರಿಂದ 21 ವರ್ಷದ ಒಳಗಿರಬೇಕು.
3) ಸ್ನಾತಕೋತ್ತರ (Post Graduation)ವ್ಯಾಸಂಗ ಮಾಡುತ್ತಿದ್ದರೆ ವಿದ್ಯಾರ್ಥಿಯ ವಯಸ್ಸು 21 ರಿಂದ 30 ವರ್ಷ ಮೀರಿರಬಾರದು.
4) ಅರ್ಜಿದಾರ ವಿದ್ಯಾರ್ಥಿಯು ಇತರ ಯಾವುದೇ ಬ್ಯಾಂಕ್/ಆರ್ಥಿಕ ಸಂಸ್ಥೆ/ ಇಲಾಖೆಗಳಿಂದ ಸಾಲವನ್ನು ಪಡೆದಿರಬಾರದು.
5) ವಿದ್ಯಾರ್ಥಿಯು ಸರ್ಕಾರಿ ಕಾಲೇಜು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
6) ಉನ್ನತ ವ್ಯಾಸಂಗದ ಕೋರ್ಸ್‌ಗಳಲ್ಲಿದ್ದವರು ಸಿ.ಇ.ಟಿ ಪರೀಕ್ಷೆಯ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು.

ಇದನ್ನೂ ಓದಿ: Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

Required Documents- ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು:

  • ಅಭ್ಯರ್ಥಿಯ ಆಧಾರ್ ಕಾರ್ಡ/Aadhar card
  • ಜಾತಿ ಪ್ರಮಾಣ ಪತ್ರ/Caste Certifucate
  • ಆದಾಯ ಪ್ರಮಾಣ ಪತ್ರ/Income Certificate
  • ವ್ಯಾಸಂಗ ಪ್ರಮಾಣ ಪತ್ರ/Education certificate
  • ಬ್ಯಾಂಕ್ ಪಾಸ್ ಬುಕ್/Bank passbook
  • ಶಾಲಾ ಪ್ರವೇಶ ಪತ್ರ/School Certificate
  • ಪೋಟೋ/Photocopy
  • ಮೊಬೈಲ್ ನಂಬರ್/Mobile number

ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!

How To Apply-ಅರ್ಜಿಯನ್ನು ಸಲ್ಲಿಸುವ ವಿಧಾನ:

ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಸೇವಾಸಿಂಧು ಪೋರ್ಟಲ್ ಗೆ ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲಿಯೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ Apply Now ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Car Subsidy- ಕಾರು ಖರೀದಿ ಮಾಡಲು ಶೇ.50% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

Study Loan Scheme

Step-2: ನಂತರ ಈ ವೆಬ್ಸೈಟ್ ಗೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ “Register Here” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಐಡಿಯನ್ನು ರಚಿಸಿಕೊಳ್ಳಬೇಕು. ನಂತರ ಅರ್ಜಿದಾರರ ಐಡಿ ಮತು OTP ಅನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ತದನಂತರ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ವಿರುವ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಮುಕ್ತಾಯಗೊಳ್ಳುತ್ತದೆ.

ಇದನ್ನೂ ಓದಿ: MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

Karnataka Education Loan Scheme-ಅತೀ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ:

ರಾಜ್ಯ ಸರ್ಕಾರದಡಿ ಬರುವ ವಿವಿಧ ಅಭಿವೃದ್ಧಿ ನಿಗಮಗಳಿಂದ ಪ್ರತಿ ವರ್ಷ ಈ ಸಮಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಲು ಅತೀ ಕಡಿಮೆ ಬಡ್ಡಿದರದಲ್ಲಿ ಅಂದರೆ ಶೇ 2% ಬಡ್ಡಿದರದಲ್ಲಿ ₹4.00 ಲಕ್ಷದಿಂದ ₹5.00 ಲಕ್ಷದವರೆಗೆ ಸಾಲವನ್ನು ಒದಗಿಸಲು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ದೇವರಾಜು ಅರಸು ನಿಗಮದಿಂದ ಪ್ರಸ್ತುತ ಅರ್ಜಿಯನ್ನು ಆಹ್ವಾನಿಸಲಾಗಿದೆ.

Education Loan Course Covered-ಯಾವೆಲ್ಲ ಪದವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುತ್ತದೆ:

ಕರ್ನಾಟಕ ರಾಜ್ಯ ಸರ್ಕಾರದಡಿ ಬರುವ ವಿವಿಧ ನಿಗಮಗಳಿಂದ ಅತೀ ಕಡಿಮೆ ಬಡ್ಡಿದರದಲ್ಲಿ ಈ ಕೆಳಗಿನ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ನೀಡಲಾಗುತ್ತದೆ.

ಬಿ.ಇ(ಸಿ.ಇ.ಟಿ), ಎಂ.ಬಿ.ಬಿ.ಎಸ್, ಬಿ.ಯೂ.ಎಂ.ಎಸ್(ಸಿ.ಇ.ಟಿ), (Bachelar of Unam Medicine and Surgery), ಬಿ.ಡಿ.ಎಸ್(ಸಿ.ಇಟಿ), ಬಿ.ಎ.ಎಂ.ಎಸ್‌ (ಸಿ.ಇ.ಟಿ), ಬಿ.ಎಚ್.ಎಂ.ಎಸ್(ಸಿ.ಇ.ಟಿ), (Bachelar of Homeopathic Medicine and Surgery), ಎಂ.ಬಿ.ಎ (ಸಿ.ಇ.ಟಿ), ಎಂ.ಟೆಕ್‌ (ಸಿ.ಇ.ಟಿ), ಎಂ.ಇ (Master of Engineering), ಎಂ.ಡಿ (Doctor of Medicine), ಪಿ.ಹೆಚ್.ಡಿ, ಬಿ.ಸಿ.ಎ/ಎಂ.ಸಿ.ಎ, ಎಂ.ಎಸ್. ಅಗ್ರಿಕಲ್ಚರ್‌, ಬಿ.ಎಸ್.ಸಿ(ನರ್ಸಿಂಗ್), ಬಿ.ಫಾರಂ/ಎಂ.ಫಾರಂ, ಬಿ.ಎಸ್.ಸಿಪ್ಯಾರಾಮೆಡಿಕಲ್, ಬಿ.ಎಸ್.ಸಿಬಯೋಟೆಕ್ನಾಲಜಿ, ಬಿ.ಟೆಕ್, ಬಿ.ಪಿ.ಟಿ (Bachelor of Physio Therapy)

ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ(Bachelor of Veterinary Science/Master of Veterinary Science), ಜಿ.ಎನ್.ಎಂ (General Nursing and Midwifery Course), ಬಿ.ಹೆಚ್.ಎಮ್‌ (Bachelor Degree in Hotel 22 Management), ಎಂ.ಡಿ.ಎಸ್‌ (Master of Dental Surgery), ಎಂ.ಎಸ್.ಡಬ್ಲೂ (Master of Social Work), ಎಲ್.ಎಲ್.ಎಂ, ಎಂ.ಎಫ್.ಎ(Master of Fianance and Accounting), ಎಂ.ಎಸ್. ಸಿ(ಬಯೋಟೆಕ್ನಾಲಜಿ), ಎಂ.ಎಸ್.ಸಿ.ಎಜಿ.

ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!

Student Selecation Method-ವಿದ್ಯಾರ್ಥಿಯ ಆಯ್ಕೆಯ ವಿಧಾನ ಹೇಗೆ?

ವಿವಿಧ ನಿಗಮಗಳಿಂದ ಪ್ರತಿ ವರ್ಷ ಕಾಲೇಜುಗಳು ಪ್ರಾರಂಭವಾದ ನಂತರ ಆರ್ಥಿಕ ನೆರವು ಒದಗಿಸುವ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ನಂತರ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಕೋರ್ಸಿನ ಪೂರ್ಣಾವಧಿಗೆ ಅಗತ್ಯವಿರುವ ಒಟ್ಟು ಸಾಲದ ಮೊತ್ತಕ್ಕೆ ಒಂದೇ ಬಾರಿಗೆ ಸಾಲದ ಮಂಜೂರಾತಿಯನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮುಂದೆ ಮಂಡಿಸಿ, ಅನುಮೋದನೆ/ಮಂಜೂರಾತಿ ಪಡೆಯುವುದು.

ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಪ್ರಸ್ತಾವನೆ ಸಹಿತ ನಿಗಮಕ್ಕೆ ಸಾಲ ಬಿಡುಗಡೆಗೆ ಆಯ್ಕೆ ಸಮಿತಿಯು ಕಳುಹಿಸಿ ಕೊಡುತ್ತದೆ. ನಿಗಮದ ಕೇಂದ್ರ/ವಿಭಾಗ ವ್ಯವಸ್ಥಾಪಕರ ಕಛೇರಿಯಲ್ಲಿ ಪುಸ್ತಾವನೆಯನ್ನು ಪರಿಶೀಲಿಸಿ ಸಾಲ ಮಂಜೂರಾತಿಯನ್ನು ಮಾಡಲಾಗುತ್ತದೆ.

Nigama Helpline-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿಗಳು:

ಲಿಂಗಾಯತ ನಿಗಮ ನಿಯಮಿತದ ಸಹಾಯವಾಣಿ ಸಂಖ್ಯೆ- 8022865522/9900012351

ದೇವರಾಜ ಅರಸು ನಿಗಮ ನಿಯಮಿತದ ಸಹಾಯವಾಣಿ ಸಂಖ್ಯೆ- 80-22374832, 8050770004, 805077000

RELATED ARTICLES
- Advertisment -

Most Popular

Recent Comments